2008-08-12

ಎಲ್ಲ ಲೈವ್ ಶೋ ಹೀಗೆ ..ಪೂರ್ವ ನಿರ್ಧರಿತ . ನನ್ನದು ಕೂಡ

ಎಲ್ಲ ಟಿವಿ ಚಾನೆಲ್ ಗಳಲ್ಲಿ ಲೈವ್ ಶೋ ಪ್ರಸಾರ ಆಗುತ್ತಿರುತ್ತದೆ. ನಾನು ವೀಕ್ಷಕ ಆಗಿ ನೋಡುತ್ತಿದ್ದೆ. ಆದರೆ ನಮ್ಮ ಟಿವಿ ಶೋ ದ "ರೀ ಒಂದ್ನಿಮಿಷ" ಕಾರ್ಯಕ್ರಮದಲ್ಲಿ ನಾನು ಒಬ್ಬ ಪಾರ್ಟಿಸಿಪೆಟ್ ಆಗಿದ್ದೆ. ಆಗ ನನಗೆ ಲೈವ್ ಶೋ ಹೇಗೆ ಇರುತ್ತವೆ ಎಂಬ ಅನುಭವ ಆಯಿತು. ನಾನು ಮತ್ತು ನಮ್ಮ ಸ್ಥಾನೀಯ ಸಂಪಾದಕ ಕುಮಾರನಾಥ್ ವಿಜಯ ಕರ್ನಾಟಕ ಪ್ರತಿನಿಧಿಸಿದರೆ ಪ್ರಾಜವನಿಯ ಬಾಲಕೃಷ್ಣ ಪುತ್ತಿಗೆ ಮಾತು ಮುರಳಿಧರ, ಜಯಕಿರಣ ದ ಇಬ್ಬರು ಸ್ನೇಹಿತರು ಭಾಗವಹಿಸಿದ್ದರು. ಮೊದಲ ಸುತ್ತಿನಲ್ಲಿ ಅಚ್ಚ ಗನ್ನಡದಲ್ಲಿ ಮಾತನಾಡುವುದು. ಕುಮಾರ್ ನಾಥ್ ಅವರು ಒಂದು ಇಂಗ್ಲಿಷ್ ಪದ ಹೇಳಿದರೆ, ಪ್ರಜಾವಾಣಿ ಅವರು ಒಂದು ಇಂಗ್ಲಿಷ್ ಪದ ಹೇಳಿ ಮಾರ್ಕ್ ಕಳೆದುಕೊಂಡೆವು. ಜಯಕಿರಣದ ಸ್ನೇಹಿತರು ಪೂರ್ಣ ಅಂಕ ಪಡೆದುಕೊಂಡರು. ಎರಡನೆ ಹಂತದಲ್ಲಿ ಸುಳ್ಳು ಹೇಳುವುದು. ಇದನ್ನು ನಾನು ಸಮರ್ಥವಾಗಿ ನಿಭಾಯಿಸಿದೆ. ಇದಕ್ಕೆ ಕುಮಾರನಾಥ್ ಒಳ್ಳೆ ಸಹಕಾರನೀಡಿದರು.ಈ ವಿಭಾಗ ದಲ್ಲಿ ನಾವು ಗೆದ್ದು ಮೇಲುಗೈ ಸಾಧಿಸಿದೆವು. ಪ್ರಜಾವಾಣಿ ಅವರು ಪೂರ್ಣ ಹಿಂದೆ ಬಿದ್ದಿದ್ದರು. ಆದರೂ ಜಯಕಿರನದವರು ನಮ್ಮ ಜತೆಯಲ್ಲಿ ಅಂಕ ಹಂಚಿಕೊಂಡಿದ್ದರು. ಮೂರನೇ ಸುತ್ತಿನಲ್ಲಿ ಹೌದು ಮತ್ತು ಇಲ್ಲ ಬಳಸದೆ ಉತ್ತರ ನೀಡುವ ಸ್ಪರ್ಧೆ. ಇದರಲ್ಲಿ ಪ್ರಜಾವಾಣಿ ಸ್ನೇಹಿತರು ನೆಲ ಕಚ್ಚಿದ್ದರು. ಜಯಕಿರಣದ ಸ್ನೇಹಿತರು ಉಲ್ಟಾ ಉತ್ತರ ನೀಡಿ ಮತ್ತೆ ಮುಂದೆ ಹೋದರು. ನಾವು ಒಂದು ಬಾರಿ ಮಾತ್ರ ತಪ್ಪಿ ಬಿದ್ದೆವು. ಆದರು ಜಯಕಿರಣದವರು ನಮಗಿಂತ ಮುಂದೆ ಹೋಗಿ ಆಗಿತ್ತು. ಆದರೆ ಕೊನೆ ಸ್ಥಾನ ನಮಗೆ ಇಲ್ಲ ಎಂಬುದು ಗ್ಯಾರಂಟಿ ಆಗಿತ್ತು. ಏಕೆಂದರೆ ಪ್ರಾಜವಾಣಿ ಯವರು ಒಂದು ಸುತ್ತಿನಲ್ಲಿ ಗೆಲ್ಲದೆ ಅಂಕ ಪಾತಾಳದಲ್ಲಿತ್ತು. ಕೊನೆಯ ಸುತ್ತು ಟಂಗ್ ಟ್ವಿಸ್ಟ್. ಇದರಲ್ಲಿ ನಾನು ಉತ್ತಮವಾಗಿ ಹೇಳಿ (ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ ) ಸ್ಪರ್ಧೆಯಲ್ಲಿ ಕಾವು ಮೂಡಿಸಿದೆ. ಪ್ರಜಾವಾಣಿಯ ಸ್ನೇಹಿತರು ಅಂಕದಲ್ಲಿ ಹಿಂದೆ ಬಿದ್ದಿದ್ದರು. ಆವರು ಪ್ರಬಲ ಮಾಧ್ಯಮ. ಸೋತು ಹೋದರೆ ನಾಳೆ ಪತ್ರಿಕೆಯಲ್ಲಿ ಕಾರ್ಯಕ್ರಮ ಸಂಘಟಕರಿಗೆ ಪ್ರಚಾರ ಉಲ್ಟಾ ಆಗುವ ಸಾಧ್ಯತೆ ಇತ್ತು ! ಹೀಗಾಗಿ ಅವರಿಗೆ ಸುಲಭದ ಕಪ್ಪು ಕುಂಕುಮ ಕೆಂಪು ಕುಂಕುಮ ಹೇಳುವಂತೆ ಎಂ ಸಿ ಸೂಚನೆ ನೀಡಿದ. ಅಂಕಗಳಿಂದ ಮುಂದೆ ಇದ್ದ ಜಯಕಿರಣದ ಸ್ನೇಹಿತರಿಗೆ ಕಷ್ಟದ ಟಂಗ್ ಟ್ವಿಸ್ಟ್ ರೋಡ್ ರೋಲರ್ ಅಪ್ಪರ್ ರೋಲರ್ ನೀಡಲಾಯಿತು. ಅವರು ಇದರಲ್ಲಿ ಸಂಪೂರ್ಣ ಸೋತು ಕನಿಸ್ಥ ಅಂಕ ಗಳಿಸಿದರು. ಸೊ ಅನಾಯಾಸವಾಗಿ ನಾವು ಜಯ ಗಳಿಸಿದೆವು. ಪ್ರಾಜವಾಣಿ ಸೆಕೆಂಡ್, ಜಯಕಿರನ್ ಥರ್ಡ್ ! ಎಲ್ಲ ಲೈವ್ ಶೋ ಹೀಗೆ ಇರಬಹುದಲ್ಲ ! ನಮ್ಮ ಪತ್ರಿಕೆ ನಂಬರ್ ಒನ್ , ನಾವು ಕೂಡ !

2008-08-07

ಕ್ರೈಂ ವರದಿಗಾರಿಕೆ ಒಂದು ಅನುಭವ

ವಿನಾಯಕ ಭಟ್ರು ದಿಲ್ಲಿಗೆ ಹೋದ ಮೇಲೆ ಮಂಗಳೂರಿನಲ್ಲಿ ನಾನು ಕ್ರೈಂ ವರದಿಗಾರ ಆಗಿದ್ದೇನೆ. ಕ್ರೈಂ ವರದಿಗಾರಿಕೆ ನನಗೆ ಹೊಸತೇನಲ್ಲ. ನಾನು ಕಾರ್ಕಳದಲ್ಲಿ, ಉಡುಪಿಯಲ್ಲಿ ವರದಿಗಾರ ಆಗಿ ಕೆಲಸ ಮಾಡುವಾಗ ಅನುಭವ ಆಗಿತ್ತು. ಆದರೆ ಇಲ್ಲಿ ಅನುಭವ ಎಂದರೆ ೫ ಜನ ವರದಿಗಾರಾರ ಜೊತೆ ಕೆಲಸ ಮಾಡುವುದು

ಈ ಹಿಂದೆ ಅಪರಾಧ ವರದಿಗಾರಿಕೆಯ ಸಾಮ್ರಾಜ್ಯ ಸ್ಥಾಪಿಸಿದ್ದ ವಿನಾಯಕ ಭಟ್ಟರು ಅಧಿ ಪಥ್ಯ ಸ್ಥಾಪಿಸಿದ್ದರು. ಈಗ ಅದನ್ನು ಉಳ್ಹಿಸಿಕೊಳ್ಳುವ ಸಧ್ಯ ಆದರೆ ಬೆಳೆಸಿಕೊಳ್ಳುವ ಜವಬ್ದಾರಿ ನನಗಿದೆ ! ಆದರೆ ಸಾಮ್ರಾಜ್ಯ ತಮ್ಮ ಕೈವಶಕ್ಕೆ ಉಳ್ಹಿದವರು ಕಾಯುತಿದ್ದಾರೆ ! ನಾನು ಸ್ಟೋರಿ ಮಾಡುವ ಮುಂಚೆ ಬೇರೊಬ್ಬ ಮಾಡಿ ಆಗುತ್ತವೆ ! ಬರುವ ಆರಂಭದಲ್ಲಿ ಕ್ರೈಂ ಬಗ್ಗೆ ನನಗೆ ವೀಕ್ನೆಸ್ಸ್ ಇರುವುದರಿಂದ ಇದೆ ಸಮಯಕ್ಕೆ ಆಕ್ರಮಣ ಮಾಡಿ ಕೋಟೆ ವಿಸ್ತಾರ ಮಾಡಿದರೆ !

ಹೀಗಾಗಿ ಕ್ರೈಂ ವರದಿ ಅಂದರೆ ಅದೇನೋ ಕೆಲವರಿಗೆ ಆಕರ್ಷಣೆ ತಮ್ಮ ಕೆಲಸ ಸಸುತ್ರ ಮಾಡದಿದ್ದರೂ ಕ್ರೈಂ ಸ್ಟೋರಿ ಮಾಡುವ ಚಪಲ. ನನ್ನನ್ನು ಸಹಿತ ಎಲ್ಲ ವರದಿಗಾರ್ರಿಗೂ ಇದು ಅನ್ವಯಿಸುತ್ತದೆ ! !

2008-08-03

ಏಕೆ ಗಲಭೆ, ಸುರತ್ಕಲ್ ಗಲಭೆ ನೋಡಿ ಕಲಿಯ ಬಾರದೆ

ಏಕೆ ಗಲಭೆ

ಸುರತ್ಕಲ್ ಗಲಭೆ ನೋಡಿ ಕಲಿಯ ಬಾರದೆ ಸ್ನೇಹಿತರೇ ... 1998 ಡಿಸೆಂಬರ್ 30 rimda ಸುರತ್ಕಲ್ ಗಲಭೆ ಆರಂಭ ವಾದರೆ ಹತ್ತು ದಿನ ನಡೆಯಿತು. ಇದರಲ್ಲಿ ೯ ಜನ ಸತ್ತು ೧೨೮ ಮಂದಿ ಗಾಯಗೊಂಡರು

ಇಬ್ಬರು ಗಲಭೆಕೋರರು ಸತ್ತದ್ದು ಬಿಟ್ಟರೆ ಅಮಾಯಕರನ್ನು ಮನೆಗೆ ನುಗ್ಗಿ ಕತ್ತಿಯಿಂದ ಕಡಿದು ಕಗ್ಗೊಲೆ ಮಾಡಲಾಯಿತು ಸಿಕ್ಕ ಸಿಕ್ಕವರಿಗೆ ಚೂರಿ ಇರಿಯಲಾಯಿತು ಮನೆ ಅಂಗಡಿಗೆ ನುಗ್ಗಿ ಕೊಳ್ಳೆ ಹೊಡೆಯಲಾಯಿತು ಪಾಪ ಸತ್ತದ್ದು ಮುಗ್ಧರು !7 ಮಂದಿ ಮುಸ್ಲಿಮರು ಇಬ್ಬರು ಹಿಂದೂಗಳು ಸಾವನ್ನಪ್ಪಿದರು.

ಇದಾಗಿ ೧೦ ವರ್ಷ ಕಳೆದಿದೆ ಎಲ್ಲ ಆರೋಪಿಗಳು ಬಿಡುಗಡೆ ಗೊಂಡಿದ್ದಾರೆ ! ಪೆಟ್ಟು ತಿಂದವರು ಮತ್ತೆ ಮೇಲೆ ಏಳಲು ಕಷ್ಟವಾಯಿತು ಲೂಟಿ ಮಾಡಿದವರು ಖುಷಿಯಲ್ಲಿ ಬದುಕು ತಿದ್ದಾರೆ !

ಹಾಗಾದರೆ ನಮ್ಮವರು ಎಷ್ಟು ಹೋದರು ಅವರದು ಎಷ್ಟು ಹೋಯಿತು ಎಂಬ ಕ್ರಿಕೆಟ್ ಸುದ್ದಿಯನ್ತೆ ಕೇಳುವ ಹವ್ಯಾಸ ಬೇಡ. ಹೊರಗಡೆಯಿಂದ ಬರುವ ಮುಸ್ಲಿಂ ಮತ್ತು ಹಿಂದೂ ಗುಂಡಾ ಗಳಿಗೆ ಲಾಭ ! ಪರ ವೂರಿನ ರೌಡಿಗಳು ಬಂದು ಸ್ಥಳಿಯರನ್ನು ಲೂಟಿ ಮಾಡುತ್ತಾರೆ ಅಸ್ತೆ ! ಬೇಕ್ಎ ಯಿಂಥಹ ಮೂಢ , ಕುರುಡು ಧರ್ಮ ಪ್ರೇಮ !

ನೆನಪಿಡಿ ಇದು ಭಾರತ

ಈ ಗಲಭೆಗಳು ಕೆಲವು ರಾಷ್ಟ್ರ ಬಳಿಕ ಮೊದಲು ಧರ್ಮ ಎಂದು ಹೇಳುವ ಅನ್ಯ ದೇಶ ಪ್ರೇಮಿಗಳಿಗೆ ತಕ್ಕ ಪಾಠ ಹುಡುಗಿಯರನ್ನು ಹೊತ್ತೊಯ್ಯುವ ಹಲ್ಕಾ ಮಕ್ಕಳಿಗೆ ಹೆದರಿಕೆ ಉಂಟು ಮಾಡಿದೆ ! ! ಒಳ್ಳೆ ರೀತಿಯಲ್ಲಿ ಬದುಕಿದರೆ ಬದುಕಿ ಇಲ್ಲವಾದರೆ ಅನುಭವಿಸಿ ಎಂಬ ಸಂದೇಶ ರವಾನೆಯಾಗಿದೆ