2011-12-15

ಗಂಗಾವತಿಯಲ್ಲಿ ಕನ್ನಡ ಭಾವನೆಗಳ ಮಹಾಪೂರ




ಕೃಷ್ಣದೇವರಾಯನ ಆನೆಗೊಂದಿ ಅರಮನೆ, ಆಂಜನೇಯನ ಅಂಜನಾದ್ರಿ, ಭತ್ತದ ಕಣಜ ಗಂಗಾವತಿ, ಶಿಲ್ಪಕಲೆಗಳ ಬೀಡು ಹಂಪಿ ನೋಡುವುದೇ ಪುಣ್ಯ, ಕನ್ನಡ ಧೂಳಲ್ಲಿ ಮಿಂದೆದ್ದ ಕನ್ನಡಿಗರೇ ಧನ್ಯ.  ಈ ಸಾಹಿತ್ಯ ಸಮ್ಮೇಳನಕ್ಕೆ ಬಂದ ನನ್ನಲ್ಲಿ ತುಂಬಿತು ಸಂವೇದನೆಗಳಿಗೆ ಏಳು ಬಣ್ಣ, ಅಯಾಚಿತವಾಗಿ ಹೊರ ಬಂತು ಸುದೀರ್ಘ ಚಂಪೂ ಕವನ. ಓದುವ ಕನ್ನಡ ಪ್ರೇಮಿಗಳೇ ನಿಮಗಿದೋ ನನ್ನ ನಮನ.  

ಗಂಗಾವತಿ ಸಮ್ಮೇಳನ ಸಭಾಂಗಣವೇ ಅಮರಾವತಿ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣ ಸಾಹಿತ್ಯ ಕೃಷಿ
ಹೊರಾಂಗಣದ ಜಾತ್ರೆಯಲ್ಲಿ ಜನರಿಗೆ ಖರೀದಿ ಖುಷಿ
ಬಟ್ಟೆ, ಕಳ್ಳೆಪುರಿ ವ್ಯಾಪಾರಿಗಳಿಗೆ ವಹಿವಾಟಿನ ಸುಗ್ಗಿ
ಸುಗ್ಗಿ ಕೃಷಿ ಬಿಟ್ಟು ಮೇಳಕ್ಕೆ ಬಂದ ಕೃಷಿಕರಿಗೆ ಎಗ್ಗಿಲ್ಲದ ಖುಷಿ
ಪುಸ್ತಕ ಮಾರಾಟಗಾರರಿಗೆ ಮಾತ್ರ ಕಸಿವಿಸಿ, ತಲೆಬಿಸಿ || 1 |

ಪ್ರಾಣೇಶ್ ಹಾಸ್ಯಕ್ಕೆ ಚಪ್ಪಾಳೆ ಹೊಡೆಯುವ ಅದೇ ರೀತಿ ಹೋರಾಟಕ್ಕೆ ಕೈ ಎತ್ತಿ ಪ್ರಾಣ ಕೊಡುವೆ ಎನ್ನುವ ಈ ಹೈ.ಕ. ನಾಡಿನವರ ಸಮ್ಮೇಳನವೂ ಹೈ ಕ್ಲಾಸ್ ! ಆದರೆ ಬಟ್ಟ ಬಯಲಲ್ಲಿ ತಂಬಿಗೆ ಹಿಡಿದು ಕುಕ್ಕರಗಾಲಲ್ಲಿ ಕುಂತು ಬಹಿರ್ದೆಶೆ ಜತೆ ಉಭಯಕುಶಲೋಪರಿ ಇನ್ನೊಂದು ಕ್ಲಾಸ್ !

ಪ್ರಾಂಗಣದ ಹೊರಗೂ ತುಂಬಿದ ಜನ
ಇಲ್ಲಿನ ಕನ್ನಡಿಗರಿಗೆ ಕನ್ನಡವೇ ಪ್ರಾಣ
ಎಲ್ಲೆಲ್ಲೂ ಕಾವ್ಯ, ಕವನ ಗಾಯನದ ಅನುರಣ
ಹೊರಾಂಗಣದಲ್ಲಿ ದೂಳು, ಆಶೌಚದ ಅನಾವರಣ!
ಅತಿಥಿಗಳಿಗೆ ಮನೆ ಮನೆಯಲ್ಲಿ ಭೂರಿ ಭೋಜನ
ಸಮ್ಮೇಳನದಲ್ಲಿ ಮಾತ್ರ ಬರೀ ಜನವೋ ಜನ

ಬರ್ರಿ, ಕುಂದುರ್ರಿ ರೊಟ್ಟಿ ತಗೋರಿ ಎಂದು ಆತಿಥ್ಯ ನೀಡುವ ಸಹೃದಯರ ಭಾಷೆ ಒಂದೆಡೆ,  ನಾ ಒಳ್ಳೆ ಸೂಳ ಮಗ, “ಅವ ಕೆಟ್ಟ ಉಡಾಳ್ ಸೂಳಮಗ ಅದಾನ’” ಎನ್ನುವ  ಅಶ್ಲೀಲ ಸಾಹಿತ್ಯ ಇಲ್ಲಿ ಜನಜನಿತ, ಎಂದಿಗೂ ಆಗದು ಅಹಿತ !

ಏಳು ಗುಡ್ಡಗಳ ಗಂಗಾವತಿಯಲ್ಲಿ ಸಾಹಿತ್ಯ ಗಂಗೆ ಹರಿಯುತ್ತಿರೆ
ಸಮೀಪದ ಪಂಪಾನದಿ ತೀರದಿ ಹರಿಯುತ್ತಿದೆ ಮದಿರೆ ಹೊಳೆ
ಪಕ್ಕದಲ್ಲಿ ಸುಂದರ ಶಿಲ್ಪಗಳ ವಿಶ್ವ ವಿಖ್ಯಾತ ಹಂಪಿ,
ವಿರೂಪಾಪುರ ಗಡ್ಡಿ ಹಾಳು ಮೂಳುಗಳ ಕೊಂಪಿ
ನಿಶೆ ಏರುತ್ತಿರೆ ಸಣಾಪುರ ಕೆರೆಯಲ್ಲಿ ಬೆಳದಿಂಗಳ ಬೆಳ್ಳಿ ನೊರೆ
ನದಿ ದಡದಲ್ಲಿ ಪವಡಿಸಿದ ವಿದೇಶಿಯರ ಬಾಯಲ್ಲಿ ಮದಿರೆಯ ನೊರೆ
ಅಲ್ಲೊಂದು ಸಾರಸ್ವತ ಲೋಕ, ಇಲ್ಲಿ ಬರಿದೇ ಮಾದಕ ಲೋಕ

ಸಮ್ಮೇಳನದ ವಿಶಾಲ ಮಾಧ್ಯಮ ಕೇಂದ್ರ ಈ ಬಾರಿ ಜನರ ಕುತೂಹಲ ಕೇಂದ್ರ, ಕಂಪ್ಯೂಟರ್, ಲ್ಯಾಪ್ ಟಾಪ್ ಮುಂದೆ ಕುಂತು ಕೀಲಿ ಮಣೆಗಳಲ್ಲಿ ಕೈ ಒತ್ತುವವರ ಕಾಣಲು ಕುತೂಹಲಿಗಳ ದಂಡು. ವಸ್ತು ಪ್ರದರ್ಶನವೋ ಎನ್ನುವಂತೆ ಅನುಕ್ಷಣವೂ ರಶ್ಶೋ ರಶ್.

ಮಾಧ್ಯಮ ಲೋಕದಲ್ಲಿ ಸುದ್ದಿ ಸಮೃದ್ಧಿ
ಆಗಬಹುದೇ ಕನ್ನಡ ಸಾಹಿತ್ಯದ ವೃದ್ಧಿ
ಇದೆಲ್ಲವೂ ನೋಡುಗರ ದೃಷ್ಟಿ
ಬಂದು ಹೋಯಿತು ಮತ್ತೊಂದು ಖಗ್ರಾಸ ಚಂದ್ರಗ್ರಹಣ
ಸರಿಯಲಿ ಕನ್ನಡಕ್ಕೆ, ಕನ್ನಡ ಶಾಲೆಗಳಿಗೆ  ಬಡಿದ ಗ್ರಹಣ
|


2011-08-06

ಗಂಗಾವತಿ ಎಂಬ ಜೈಲು, ಆರೋಪಿಯೇ ವಾರ್ಡನ್

ಗಂಗಾವತಿಯ ಆನುಭವ ಬರೆದಷ್ಟು ಮುಗಿಯದು. ಅದೊಂದು ಕಚೇರಿ ಎಂದು ಸಹೋದ್ಯೋಗಿಗಳು ಎಂದೂ ಭಾವಿಸಿರಲಿಲ್ಲ. ವಿಕೆಯಲ್ಲಿ ಕೆಟ್ಟ ಬಾಸ್ ಬಗ್ಗೆ ಬರೆದ ಲವಲವಿಕೆ ಲೇಖನದ ಶೇ.90 ನಮ್ಮ ಕಚೇರಿಗೆ ಸಂಬಂಧಿಸಿದ್ದು ಎಂದು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಆದರೂ ಬಾಸ್ ಬಗ್ಗೆ ವಿಪರೀತ ಹೆದರಿಕೆ. ಕೂಲಿ ಕಾರ್ಮಿಕರಿಗೆ ಕೂಡಾ ಮರ್ಯಾದೆ ನೀಡುತ್ತಾರೆ. ಆದರೆ ಬಾಸ್ ಎಂಬ ವ್ಯಕ್ತಿ ಬಹುತೇಕ ಸಿಬ್ಬಂದಿಯನ್ನು ಕೀಳಾಗಿ ನೋಡುತ್ತಿದ್ದರು. ನನ್ನನ್ನು ಮಾತಿನಲ್ಲಿ ಕೀಳಾಗಿ ನೋಡದಿದ್ದರೂ ಕೊಟ್ಟ ಕೆಲಸ ಮಾತ್ರ ಟೆಕ್ನಿಕಲ್. ನನ್ನ ಹುದ್ದೆ ಪ್ರಧಾನ ವರದಿಗಾರ ಅಥವಾ ಅದಕ್ಕೆ ಸಮವಾದ ಮುಖ್ಯ ಉಪಸಂಪಾದಕ. ಆದರೆ ಮೊದಲ ಒಂದುವರೆ ತಿಂಗಳು ಫೈಲ್ ಗಳನ್ನು ಡೌನ್ ಲೋಡ್ ಮಾಡುವ ಕೆಲಸ ನೀಡಿದ. ಇದನ್ನು ಎಚ್ ಆರ್ ವಿಭಾಗಕ್ಕೆ ತಿಳಿಸಿದರೂ ಆಯಿತು ಗಮನಕ್ಕೆ ತರುತ್ತೇವೆ ಎಂದು ಹೇಳಿ ಸುಮ್ಮನಾದರು. 15 ದಿನ ಪೇಜ್ ಕಟ್ಟುವ ಕೆಲಸ ನೀಡಿದರು. ಉತ್ತಮ ಹೆಡ್ಡಿಂಗ್, ಪೇಜ್ ಲೇಔಟ್, ಎಡಿಟಿಂಗ್ ನಿಂದ ಗಮನ ಸೆಳೆದೆ. ಇದನ್ನು ಬ್ಯೂರೋ ಚೀಫ್ ಎಂಬಾತ ನನ್ನ ಬಳಿ ಹೊಗಳಿಯೂ ಇದ್ದ. ಆದರೆ ಇತ್ತ ಮಂಗಳೂರಿನ ಬಾಲ್ಡಿ ಕುಮಾರನಾಥ ಮನೆ ಹಾಳನ ಜತೆ ನಿರಂತರ ಅಕ್ರಮ ಸಂಪರ್ಕ ಬೆಳೆಸಿ ನನ್ನ ಬಗ್ಗೆ ಏನೆಲ್ಲಾ ಹೇಳಿ ಕಿವಿ ಊದಿದ. ಮತ್ತೆ ನನಗೆ ಸಿಕ್ಕಿದ್ದು ಅದೇ ಡೌನ್ ಲೋಡ್ ಕೆಲಸ. ಆದರೆ ಕಂಪನಿ ಕೊಟ್ಟ ಕೆಲಸ ಎಂದು ನಿಷ್ಠೆಯಿಂದ ಮಾಡಿದೆ. ಫೈಲ್ ಡೌನ್ ಲೋಡ್ ನಲ್ಲಿ ನನ್ನಷ್ಟು ವೇಗವಾಗಿ, ಶಿಸ್ತುಬದ್ಧವಾಗಿ ಗಂಗಾವತಿ ಬ್ಯೂರೋದಲ್ಲಿ ಇನ್ಯಾರೂ ಇಲ್ಲ ಎಂದೇ ನನ್ನ ಭಾವನೆ. ನಾನು ರಜೆ ಹೋದಾಗ ಡೌನ್ ಲೋಡ್ ಗೆ ರವೀಂದ್ರ ಜಲರಡ್ಡಿ ಎಂಬ ಹಿರಿಯ ಉಪಸಂಪಾದಕರನ್ನು ಕುಳಿತುಕೊಳ್ಳಿಸಿ, ವಿಕೃತ ಆನಂದ ಪಡೆಯುತ್ತಿದ್ದ. ಜೂನಿಯರ್ ಉಪಸಂಪಾದಕರಿಗೆ ಮುಖ್ಯ ಉಪಸಂಪಾದಕರ ಗ್ರೇಡ್ ನೀಡುತ್ತಿದ್ದ. ಕಂಪನಿ ಪ್ರಮೋಟ್ ಮಾಡಿದವರಿಗೆ ಡಿಮೋಶನ್, ಈತನ ಬಕಿಟ್ ಹಿಡಿದವರಿಗೆ, ಒಂದಷ್ಟು ಕೊಟ್ಟವರಿಗೆ ನಿಯಮ ಬಾಹಿರವಾಗಿ ಪ್ರಮೋಶನ್ ನೀಡುತ್ತಿದ್ದ, ಕಚೇರಿಗೆ ಬಂದರೆ ಕೇವಲ ಮೊಬೈಲ್ ನಲ್ಲಿ ತನ್ನ ಕಚೇರಿ ಬಗ್ಗೆ ತನಗೆ ಬೇಕಾದವರ ಬಗ್ಗೆ, ತನಗೆ ಬೇಕಾದ ಸುದ್ದಿಗಳ ಬಗ್ಗೆ ಲಾಬಿ ಮಾಡುವುದೇ ಕೆಲಸ. ಹೀಗಾಗಿ ಉಳಿದವರು ದೂರು ತೆಗೆದುಕೊಂಡು ಹೋದರೆ ಅವರನ್ನೇ ಕೆಲಸದಿಂದ ಔಟ್ ಮಾಡುತ್ತಿದ್ದ. ಗಂಗಾವತಿ ಕಚೇರಿಯಲ್ಲಿ 8 ಮಂದಿ ಕೆಲಸ ಕಳೆದುಕೊಂಡಿರುವುದು, 4 ಮಂದಿ ವರ್ಗಾವಣೆ ಆಗಿರುವುದು ಜ್ವಲಂತ ಉದಾಹರಣೆ. ವಿಸಿ ಹೀರೇಮಠ್, ವೀರೇಂದ್ರ ಪಾಟಿಲ್ ಬಳೀಕ ಜಲರಡ್ಡಿ ಲೇಟೆಸ್ಟ್ ಉದಾಹರಣೆ. ಈಗ ಶೇ.90 ಮಂದಿ ವರ್ಗಾವಣೆಗೆ ಕಾದಿದ್ದಾರೆ. ಏಕೆಂದರೆ ಅದೊಂದು ಜೈಲ್, ಅದರಿಂದ ಬಿಡುಗಡೆ ಬೇಕು ಎಂದರು. ಧೈರ್ಯವಾಗಿ ಯಾರು ಹೇಳುವುದಿಲ್ಲ. ಏಕೆಂದರೆ ಅಲ್ಲಿದ್ದು ಎಲ್ಲರೂ ಹೇಡಿಗಳೇ ಆಗಿ ಬದಲಾಗಿದ್ದಾರೆ. ಇನ್ನೂ ಇದೆ.. ನಿರೀಕ್ಷಿಸಿ..

2011-07-31

ಗಂಗಾವತಿ ಅನುಭವವೂ ಧರ್ಮಜನ ನರಕದರ್ಶನವೂ

ಮಹಾಭಾರತದಲ್ಲಿ ಧರ್ಮರಾಯ ನರಕದರ್ಶನ ಕತೆ ನಿಮಗೆ ಗೊತ್ತಿರಬಹುದು, ಯಾವುದೇ ತಪ್ಪು ಮಾಡದಿದ್ದ ಸತ್ಯಸಂಧ ಧರ್ಮರಾಯ ನರಕಕ್ಕೆ ಹೋದದ್ದು ಹೇಗೆ ? ಪ್ರಶ್ನೆ ಮೂಡುತ್ತದೆ. ಮಹಾಭಾರತ ಅಂತ್ಯದಲ್ಲಿ ಪಾಂಡವರು ದ್ರೌಪದಿ ಸಹಿತಿ ಸಜೀವವಾಗಿ ಸ್ವರ್ಗಕ್ಕೆ ಹೋಗಲು ತೀರ್ಮಾನಿಸುತ್ತಾರೆ. ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ದ್ರೌಪದಿ ಸತ್ತುಬೀಳುತ್ತಾಳೆ. ಆಗ ಭೀಮ ಕೇಳುತ್ತಾನೆ, ಅಣ್ಣಾ ದ್ರೌಪದಿ ಬಿದ್ದಳು ಎನ್ನುತ್ತಾನೆ. ಆಗ ಧರ್ಮರಾಯ ಹೇಳುತ್ತಾನೆ, ಆಕೆ ಐದು ಗಂಡಂದಿರನ್ನು ಸಮಾನವಾಗಿ ನೋಡದೆ ನಿನ್ನ ಮೇಲೆ ಅತಿ ಪ್ರೀತಿ ಇಟ್ಟುಕೊಂಡಿದ್ದಳು ಹೀಗಾಗಿ ಸಜೀವ ಸ್ವರ್ಗ ಸಿಕ್ಕಿಲ್ಲ, ಎನ್ನುತ್ತಾನೆ, ನಕುಲ ಸಹದೇವರೂ ಬೀಳುತ್ತಾರೆ ಆಗ ಭೀಮ ಕೇಳುವಾಗ ಅವರಿಬ್ಬರಿಗೆ ತಮ್ಮ ಸೌಂದರ್ಯದ ಮೇಲೆ ಅಹಂಕಾರ ಇತ್ತು ಹೀಗಾಗಿ ಸತ್ತರು ಎನ್ನುತ್ತಾನೆ, ಅರ್ಜುನ ಬೀಳುವಾಗ "ಆತನಿಗೆ ಮೂರುಲೋಕದ ಶೂರ' ಎಂಬ ಅಹಂಕಾರ ಇತ್ತು ಎನ್ನುತ್ತಾನೆ, ಭೀಮ ನಾನು ಬೀಳುತ್ತಿದ್ದೇನೆ ಎನ್ನುವಾಗ ನೀನು ಸಹೋದರನ ವಿರುದ್ಧ ಧನಿ ಎತ್ತುತ್ತಿದ್ದೆ ಎಂದು ಧರ್ಮರಾಯ ನುಡಿಯುತ್ತಾನೆ. ಇವರ ಜತೆ ನಾಯಿ ಯೂ ಒಟ್ಟಿಗೆ ಸ್ವರ್ಗದತ್ತ ಬರುತ್ತಿತ್ತು. ದಾರಿ ಮುಗಿಯಿತು, ಬಾಗಿಲು ತೆರೆದರೆ ಅಲ್ಲಿ ಎಣ್ಣೆ ಕೊಪ್ಪರಿಗೆಯಲ್ಲಿ ಜನರನ್ನು ಕಾಯಿಸುತ್ತಿದ್ದಾರೆ, ಅಂದರೆ ನರಕ, ಸಹೋದರರೂ ಅಲ್ಲಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಸ್ವರ್ಗಕ್ಕೆ ಧರ್ಮಜನನ್ನು ಕರೆದೊಯ್ಯಲಾಗುತ್ತದೆ. ಅಲ್ಲಿ ಕೌರವ, ದುಃಶ್ಯಾಸನ ಎಲ್ಲರೂ ರಂಭೆ, ಉರ್ವಶಿ ಜತೆ ಮಜಾ ಮಾಡುತ್ತಿರುತ್ತಾರೆ. ಆಗ ಧರ್ಮಜ ಮಮ್ಮಲ ಮರುಗುತ್ತಾನೆ. ಜತೆಗೆ ಇದ್ದ ನಾಯಿ ರೂಪದಲ್ಲಿ ಬಂದ ಯಮ ಸಂತೈಸುತ್ತಾನೆ, ಕೌರವರು ಯುದಧದಲ್ಲಿ ಮಡಿದು ವೀರ ಸ್ವರ್ಗ ಪಡೆದರು. ಸಹೋದರರೂ ಸ್ವಲ್ಪ ಹೊತ್ತಿನ್ಲಿ ಸ್ವರ್ಗ ಸೇರಲಿ್ಲದ್ದಾರೆ. ನಿನಗೆ ನರಕ ದರ್ಶನ ಮಾಡಿದ್ದು ಏಕೆಂದರೆ ನೀನು ತಪ್ಪು ಮಾಡಿರುವೆ. ಕುರುಕ್ಷೇತ್ರ ಯುದ್ಧದಲ್ಲಿ ಸುಳ್ಳು ಹೇಳಿದ್ದೆ. ಗುರು ದ್ರೋಣರು ತನ್ನ ಮಗ ಯುದ್ಧದಲ್ಲಿ ಸತ್ತೆ ಶಸ್ತ್ರ ತ್ಯಾಗ ಮಾಡುತ್ತಾರೆ ಎಂಬುದು ಗೊತ್ತಿದ್ದು ನೀನು ಯುದ್ಧದಲ್ಲಿ ಅಶ್ವತ್ಥಾಮ ಹತಃ ಕುಂಜರಃ ಎಂದು ಹೇಳಿದೆ. ನಿಮ್ಮದೇ ಪಾಳಯದಲ್ಲಿ ಅಶ್ವತ್ಥಾಮ ಎಂಬ ಆನೆಯನ್ನು ಕೊಂದು "ಆಶ್ವತ್ಥಾಮ ಆನೆ ಸತ್ತ ಎಂದು ಹೇಳಿದೆ. ಆನೆ ಎಂಬುದನ್ನು ಮಾತ್ರ ಯಾರಿಗೂ ಕೇಳದಂತೆ ಮೆಲ್ಲಗೆ ಹೇಳಿದೆ. ನೀನು ಸತ್ಯಸಂಧ ಎಂದು ತಿಳಿದು ದ್ರೋಣ ಶಸ್ತ್ರ ಸಂನ್ಯಾಸ ಮಾಡಿದ. ದುಷ್ಟಧ್ಯುಮ್ನ ದ್ರೋಣರನ್ನು ಕಡಿದು ಕೊಂದ. ನೀನು ಸತ್ಯವನ್ನೇ ಹೇಳಿದರೂ ಮೋಸ ಮಾಡಿದ್ದೀಯ ಅದಕ್ಕೆ ನರಕದರ್ಶನ ಮಾಡಿದೆ ಎಂದರು. ನಾನು ಈ ಕತೆಯನ್ನು ಏಕೆ ಹೇಳುತ್ತಿದ್ದೇನೆ ಎಂದರೆ ನನಗೆ ಗಂಗಾವತಿ ಎಂಬ ಕಚೇರಿ ದರ್ಶನ ಮಾಡಿದ್ದೆ. ಅಲ್ಲಿನ ಚಿತ್ರಗುಪ್ತ, ಯಮಕಿಂಕರರನ್ನು ಕಂಡು ಎರಡು ತುಲನೆ ಮಾಡಲು ಮನಸ್ಸಾಯಿತು. ಕಚೇರಿಯಲ್ಲಿ ಬಹುತೇಕ ಸಹೋದ್ಯೋಗಿಗಳು (ಶೇ.90) ಒಳ್ಳೆಯವರು ಒಂದಿಬ್ಬರು ಕೆಟ್ಟವರಿರಬಬಹುದು. ಡ್ರೈವರೇ ಸರಿ ಇಲ್ಲದಿದ್ದರೇ ಅಪಘಾತ ಗ್ಯಾರಂಟಿ. ಹೀಗಾಗಿ ಅಲ್ಲಿ ಕಚೇರಿಯಲ್ಲಿ ಅನುಭವ ಕೆಟ್ಟದೇ ಆಗಿದ್ದರೂ ವೃತ್ತಿ ಜೀವನದಲ್ಲಿ ಮಾತ್ರ ಅಪೂರ್ವ ಅನುಭವ ಆಗಿ ದಾಖಲಾಗಿರುವುದು ಮಾತ್ರ ನನ್ನ ಸುದೈವವೇ ಸರಿ. ಹೊಸ ಲೋಕ ಕಂಡಂತಾಯಿತು, ಗಂಗಾವತಿಯು ಮುಗ್ಧ, ಒರಟು ಮನಸ್ಸಿನ ಜನರನ್ನು ಅವರ ಮಾತು, ಸಹಕಾರವನ್ನು ನಾನೆಂದಿಗೂ ಮರೆಯಲಾರೆ.

2011-07-28

burkha dath stepdown'

KVL Narayan Rao will be the Executive Vice Chairman; Vikram Chandra to be the new Group CEO; Barkha Dutt likely to step down from Group Editor role. NDTV Ltd. is undergoing through top management changes. BestMediaInfo.com has learnt from the highly placed sources within the organization that NDTV will soon announce the changes. According to the information coming from the confirmed sources, Current Group CEO KVL Narayan Rao will be elevated to Executive Vice Chairman role at the NDTV Ltd. while Vikram Chandra will be replacing him as Group CEO. Chandra is currently Chief Executive Officer for NDTV Convergence & NDTV Networks. Chandra has been associated with NDTV since 1994 and is one of India’s best known anchorpersons. He presents ‘The Big Fight’, which has long been one of India’s top rated news and current affairs programmes and ‘Gadget Guru’ along with several other special shows. Previously, Vikram was the Managing Editor of NDTV Profit. As a special correspondent, he has extensively covered the Siachen & Kargil wars, and the conflict in Kashmir. Vikram has been named “Global Leader for Tomorrow” by the World Economic Forum in Davos and won the Indian Television Academy Award 2008 for “Best Anchor for a Talk Show” amongst other coveted recognitions. In another major development in the history of the channel, Barkha Dutt’s relationship with NDTV may soon undergo a big change and she might step down from Group Editor-English News; however, the nature of the new relationship could not be confirmed by the time of filing of the report. According to the sources, the change in Barkha’s relationship with the channel will not be announced with other changes and it may take some time. When contacted, Barkha denied any such change in relationship with the channel and termed the information as rubbish and wrong. Followed by Barkha’s denial, official spokesperson of NDTV Manisha Natarajan has reiterated that the reports about change in roles of Barkha Dutt and Srinivasan Jain is speculative and Barkha Dutt will carry on with her role as the Group Editor along with the Srinivasan Jain as the Managing Editor of the group.

2011-07-25

ರಾಜಗೌರವ ಬಳಿಕ ರಾಜೀನಾಮೆ !

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸುಮಾರು 11 ವರ್ಷಗಳಿಂದ ಕೆಲಸ ಮಾಡಿ, ಪ್ರಾಮಾಣಿಕವಾಗಿ ಸಾಕಷ್ಟು ಗಳಿಸಿದ್ದೇನೆ. ಸ್ಥಾನೀಯ ಸಂಪಾದಕ ಕುಮಾರನಾಥ್ ಕುತಂತ್ರದಿಂದ ನಾನು ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು. ರಾಜಗೌರವ ಬಳಿಕ ರಾಜೀನಾಮೆ. ಹೆಚ್ಚು ಕೆಲಸ ಮಾಡಿದರೂ ಸಮಸ್ಯೆ.

2011-06-07

ರಾಜಧಾನಿಯಲ್ಲಿ "ರಾಜಗೌರವ"

Mangalore: Vijaya Karnataka Journalist Jitendra K Bags Charaka Award Mangalore: Vijaya Karnataka Journalist Jitendra K Bags Charaka Award Daijiworld Media Network – Mangalore (RD/VA) Mangalore, Jun 27: Jitendra Kundeshwar, chief correspondent at the city bureau of Karnataka’s leading Kannada daily ‘Vijay Karnataka,’ (VK) has bagged the prestigious Charaka Progressive Journalism Award. Shangondas Gupta, executive director of Communication for Development and Learning (CDL) announced the winners of Charaka Progressive Journalism Award for the year 2009 and 2010. Kundeshwar also bagged the Vaddarse Award – 2003 for his humanity focused Kannada article – No one concerned over tribal issues, Pa Go Rural Report Award for his article – Sustenance of tribal in the forest of Someshwar near Hebri. He is a BA and LLB graduate from Vaikunta Baliga Law College, Udupi and also possesses degree in Sanskrit literature from Sanskrit College, Udupi. He is the son of Ganga R Bhat and late Raghavendra Bhat of Kundeshwar, near Karkala. The award will be presented to Kundeshwar at Raj Bhavan on Thursday July 1 by Governor Hansraj Bharadwaj. The award comprised of Charaka trophy and a cash prize of Rs 10,000. Radhakrishna Badthi, sub-editor of Vijay Karnataka has won a special award for the year 2010 under water conservation journalism.

ಪೊಲೀಸ್-ಪತ್ರಕರ್ತ-ಜನ ಸಂಪರ್ಕ

Udayavani | Aug 04, 2010 ಕಾರ್ಕಳ, ಆ. 4: ಕಾನೂನಿಗೆ ತಲೆಬಾಗಿ ನಡೆಯುವವರ ಪರವಾಗಿ ಪೊಲೀಸ್ ಇಲಾಖೆಯು ಯಾವಾಗಲೂ ಸೌಮ್ಯಧೋರಣೆ ತಳೆದರೆ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೆಗೊಳ್ಳುತ್ತದೆ. ಅಂತೆಯೇ ಕಳವು ಮಾಲುಗಳನ್ನು ಖರೀದಿಸುವವರ ವಿರುದ್ಧ ಉಗ್ರ ಕ್ರಮ ಕೆಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರು ಅವರು ಹೇಳಿದರು. ಕಾರ್ಕಳ ರೋಟರಾಯಕ್ಟ್ ಕ್ಲಬ್ ವತಿಯಿಂದ ಆ. 3 ರಂದು ನಿಟ್ಟೆ ಗ್ರಾಮ ಬೋರ್ಗಲ್­ಗ­ುಡ್ಡೆಯ ಅಶ್ವತ್ಥಕಟ್ಟೆಯಲ್ಲಿ ಜರಗಿದ ಪೊಲೀಸ್ ಇಲಾಖೆಗೆ ಅಭಿನಂದನಾ ಸಮಾರಂಭ ಹಾಗೂ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರ ಪ್ರೀತಿ, ವಿತ್ವಾಸ, ನಂಬಿಕೆ ಇದ್ದರೆ ಯಾವುದೇ ಪ್ರಕರಣವನ್ನು ಬೇಧಸಲು ಸಾಧ್ಯ. ಈ ಸಂದರ್ಭದಲ್ಲಿ ಇಲಾಖೆಯು ಒತ್ತಡಕ್ಕೆ ಒಳಗಾಗುತ್ತದೆ. ಪ್ರಕರಣ ಬೇಧಸುವಲ್ಲಿ ತಡವಾದರೆ ಟೀಕೆಗಳು ಸಾಮಾನ್ಯ. ಶೀಘ್ರವಾಗಿ ಕೆಲಸ ಮಾಡಲು ಹೋದಾಗ ಸಾರ್ವಜನಿಕರಿಗೆ ಕೆಲವೊಂದು ತೊಂದರೆಯಾಗುತ್ತದೆ. ಈ ಸಂದರ್ಭದಲ್ಲಿ ನಾಗರಿಕರ ಸಹಕಾರ, ಹೊಂದಾಣಿಕೆ ಅಗತ್ಯ. ಇದರಿಂದ ಇಲಾಖೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹಿಂದೆ ತನಿಖೆಯ ನೆಪದಲ್ಲಿ ಹಲವಾರು ಖರ್ಚುಗಳು ಬರುತ್ತಿದ್ದಾಗ ಇಲಾಖೆಯವರು ಅದಕ್ಕಾಗಿ ವಾಮಮಾರ್ಗದಲ್ಲಿ ಹೋಗುತ್ತಿದ್ದರು. ಆದರೆ ಈಗ ರಾಷ್ಟ್ರದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ಸರಕಾರವು ತನಿಖೆಗೆ ಸಂಬಂಧಪಡುವ ಎಲ್ಲಾ ಖರ್ಚುಗಳನ್ನು ಭರಿಸುವ ಅಧ ಕಾರವನ್ನು ಎಸ್ಪಿ ಅವರಿಗೆ ನೀಡಿರುವುದರಿಂದ ಈಗ ಆ ಸಮಸ್ಯೆ ನಿವಾರಣೆಯಾಗಿದೆ. ಪಶ್ಚಿಮ ವಲಯದಲ್ಲಿ ಕಡಿಮೆ ಅಪರಾಧ ನಡೆಯುವ ಜಿಲ್ಲೆ ಉಡುಪಿಯಾಗಿದ್ದು, ಅದರಲ್ಲೂ ಕಾರ್ಕಳದಲ್ಲಿ ಬಹಳಷ್ಟು ಅಪರಾಧಗಳು ಕಡಿಮೆಯಾಗಿವೆ. ಕಾರ್ಕಳ ಪೊಲೀಸರು ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಬೋರ್ಗಲ್ ಗುಡ್ಡೆ ಶಕು ಬಾ ಅವರ ಕೊಲೆ ಪ್ರಕರಣವನ್ನು ಬೇಧಸಿದ ಸಂಬಂಧಪಟ್ಟ ಅಧ ಕಾರಿ ಹಾಗೂ ಸಿಂಬಂದಿಗಳಿಗೆ ಇಲಾಖೆಯ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು. ಮತ್ತು ತನ್ನ ವೆಯುಕ್ತಿಕ ಕೊಡುಗೆಯಾಗಿ ರೂ. 10,000 ವನ್ನು ನೀಡುತ್ತೇನೆ ಎಂದು ಅವರು ಹೇಳಿದರು. ಗ್ರಾಮಾಂತರ ಠಾಣೆಯ ಸಬ್ಇನ್­ಸ್ಟೆಕ್ಟರ್ ಸಂದೇಶ್ ಪಿ. ಜಿ. ಅವರು ಕೊಲೆ ಪ್ರಕರಣ ಬೇಧಸುವ ಸಂದರ್ಭದಲ್ಲಿ ತನ್ನ ಅನುಭವವನ್ನು ವ್ಯಕ್ತಪಡಿಸಿದರು. ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ್, ರೋಟರಾಯಕ್ಟ್ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಅಭಿನಂದನ್ ಶೆಟ್ಟಿ, ವರುಣ್ ಅಸೋಸಿಯೇಟ್ಸ್ನ ಪಾಲುದಾರ ಆರ್. ವಿವೇಕಾನಂದ ಶೆಣೆ, ಡಿವೆಎಸ್ಪಿ ಸಂತೋಷ್ ಕುಮಾರ್, ನಿವೃತ್ತ ಮಿಲಿಟರಿ ಅಧ ಕಾರಿ ಶಂಕರ್ ಶೆಟ್ಟಿ, ಅಶ್ವತ್ಥ ಕಟ್ಟೆ ಸಮಿತಿಯ ಅಧ್ಯಕ್ಷ ವೃಷಭ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಕಳ ರೋಟರಾಯಕ್ಟ್ ಅಧ್ಯಕ್ಷ ನವೀನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕರಾವಳಿ ವಲಯ ಪ್ರತಿನಿಧ ಶೆಲೇಂದ್ರ ರಾಎ್ ಸ್ವಾಗತಿಸಿ, ಇಕಾºಲ್ ಅಹ್ಮದ್ ವಂದಿಸಿದರು. ಈ ಸಂದರ್ಭದಲ್ಲಿ ಬೋರ್ಗಲ್ ಗುಡ್ಡೆ ಶಕು ಬಾ ಕೊಲೆ ಪ್ರಕರಣವನ್ನು ಬೇಧಸಿದ ಕಾರ್ಕಳ ಪೊಲೀಸ್ ಉಪ ಅದೀಕ್ಷಕ ಸಂತೋಷ್ ಕುಮಾರ್, ವೃತ್ತ ನಿರೀಕ್ಷಕ ಪುಟ್ಟಸ್ವಾಮೀ ಗೌಡ, ಗ್ರಾಮಾಂತರ ಉಪ ನಿರೀಕ್ಷಕ ಸಂದೇಶ್ ಪಿ. ಜಿ, ಸಿಬಂದಿಗಳಾದ ಉದಯ ಕುಮಾರ್, ಮೂರ್ತಿ ಮತ್ತು ಸತೀಶ್ ಪಳ್ಳಿ ಅವರನ್ನು ಸಮ್ಮಾನಿಸಲಾಯಿತು. ಹೊಸೂರು ಹೇಳಿದ್ದು *ಕಳೆದ ಒಂದು ವರ್ಷದಲ್ಲಿ ಭೂಗತ ಚಟುವಟಿಕೆಯಲ್ಲಿ ನಿರತರಾದ 165 ವ್ಯಕ್ತಿಗಳ ಬಂಧನ, 45 ಪಿಸ್ತೂಲ್­ಗ­ಳ ವಶ, ಮತೀಯ ಗಲಭೆಗೆ ಪ್ರಚೋದನೆ ನೀಡುವವರನ್ನು ಬಂಧಸಿ ಕ್ರಮ ಕೆಗೊಂಡಿರುವುದರಿಂದ ಕಳೆದ 7 ತಿಂಗಳುಗಳಿಂದ ಯಾವುದೇ ಸಮಾಜ ಘಾತುಕ ಚಟುವಟಿಕೆಗಳು ನಡೆಯಲಿಲ್ಲ. *ನಕ್ಸಲ್ ಚಟುವಟಿಕೆಯನ್ನು ವೇಗವಾಗಿ ಹತ್ತಿಕ್ಕಲಾಗುತ್ತಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಇದೇ ವೇಗದಲ್ಲಿ ಮುನ್ನಡೆದರೆ ಒಂದು ವರ್ಷದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಣ ಸಾಧ್ಯ. * 85 ಶೇ. ಕ್ಕಿಂತಲೂ ಹೆಚ್ಚಿರುವ ಕಾನ್­ಸ್ಟೆàಬಲ್­ಗ­ಳೇ ಪೊಲೀಸ್ ಇಲಾಖೆಯ ಬೆನ್ನೆಲುಬು. ಅಧ ಕಾರಿಗಳು ಅವರನ್ನು ಉತ್ತಮ ರೀತಿಯಲ್ಲಿ ನೋಡಿದರೆ ಇಲಾಖೆ ಯಶಸ್ಸು ಗಳಿಸಲು ಸಾಧ್ಯ. *ಶಕು ಬಾ ಕೊಲೆ ಪ್ರಕರಣ ಬೇಧಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ರಿಂದ ಸಾರ್ವಜನಿಕರಿಗಾದ ತೊಂದರೆಗೆ ತಾನು ವೆಯುಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ. *ಈ ಕಾರ್ಯಕ್ರಮದಲ್ಲಿ ಜನಸಂಪರ್ಕ ಸಭೆಯ ನೆಪದಲ್ಲಿ ಪೊಲೀಸರ ವಿರುದ್ಧ ಟೀಕೆ ಬಂದರೂ ಇದೇ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿರುವುದು ಶ್ಲಾಘನೀಯವಾಗಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ.

ರಾಜ "ಗೌರವ

ಮಂಗಳೂರು, ಜುಲೈ 08: ಕಮ್ಯೂನಿ ಕೇಶನ್ ಫಾರ್ ಡೆವಲಪ್ ಮೆಂಟ್ ಎಂಡ್ ಲರ್ನಿಂಗ್ ಸಂಸ್ಥೆ ಕಳೆದ ಗುರುವಾರ ಬೆಂಗಳೂರು ರಾಜ ಭವನದಲ್ಲಿ ಏರ್ಪಡಿಸಿದ್ದ ಅಭಿವೃದ್ಧಿ ಪತ್ರಿ ಕೋದ್ಯಮ ಪ್ರೋತ್ಸಾಹಕ ಪ್ರಶಸ್ಥಿ ಮತ್ತು ಅಭಿವೃದ್ಧಿ ಪತ್ರಿ ಕೋದ್ಯಮ ವಾರ್ಷಿಕ ಪ್ರದಾನ ಸಮಾರಂಭದಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ ಅವರು ಗೌರವ್ವನಿತ ರಾಜ್ಯಪಾಲ ಎಚ್.ಆರ್.ಭಾರ ದ್ವಾಜ್ ಅವರಿಂದ 'ಮಕ್ಕಳ ಹಕ್ಕುಗಳ ಪತ್ರಿ ಕೋದ್ಯಮ' ಪ್ರಶಸ್ತಿ ಸ್ವೀಕರಿಸಿದರು. http://www.gulfkannadiga.com/news-27223.html

ಹಳೇ ಮಂಗಳೂರು

angalorehistory.blogspot.com ವಿಶಾಲವಾದ ಕರಾವಳಿ ಪ್ರದೇಶ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಶತಮಾನಗಳ ಇತಿಹಾಸವಿದೆ.ಇದಕ್ಕೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಟ್ಟಡವೇ ಸಾಕ್ಷಿ.ಕೆ0ಪು ಮುರ ಕಲ್ಲಿನಿಂದ ಕಟ್ಟಿದ ಈ ಭವ್ಯವಾದ ಕಟ್ಟಡದ ನೋಟವೇ ಚೆಂದ.ಪ್ರಸ್ತುತ ಇದನ್ನು ಪುರತತ್ವ ಇಲಾಖೆಗೆ ಒಪ್ಪಿಸುವ ಕಾರ್ಯ ಆರಂಭಗೊಂಡಿದೆ.ಪೋರ್ಚುಗೀಸರು,ಮ್ಯಸೂರು ಹುಲಿ ಟಿಪ್ಪು ಸುಲ್ತಾನ್, ವಿಜಯ ನಗರದ ಅರಸರ ಆಳ್ವಿಕೆ ನಂತರ ಬ್ರಿಟಿಷರು ಇಲ್ಲಿಂದಲೇ ಆಡಳಿತ ನದೆಸಿದ್ದರು.1914 ರಿಂದ 1919 ರ ವರೆಗೆ ನಡೆದ ಒಂದನೇ ಮಹಾ ಯುದ್ದದಲ್ಲಿ ಇದೇ ಹಳ್ಳಿಯಿಂದ 88 ಮಂದಿ ಪಾಲ್ಗೊಂಡಿದ್ದು ಅವರಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಅವರ ಗೌರವಾರ್ಥ ಬರೆದ ಲೇಖನ ಇ0ದಿಗೂ ಈ ಕಟ್ಟಡದ ಗೋಡೆಯ ಮೇಲೆ ಕಾಣಬಹುದು.ಇದುವರೆಗೆ 120 ಜಿಲ್ಲಾಧಿಕಾರಿಗಳನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1799 ರಲ್ಲಿ ಬ್ರಿಟೀಷ್ ಅಧಿಕಾರಿ ಮೇಜರ್ ಮುನ್ರೋ ಅವರು ಪ್ರಥಮ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.1905 ರಲ್ಲಿ AHS ಬಹದ್ದೂರ್ ಅವರು ಅಧಿಕಾರ ವಹಿಸಿದ ಮೊದಲನೇ ಭಾರತೀಯ ಜಿಲ್ಲಾಧಿಕಾರಿಯಾಗಿದ್ದಾರೆ.M.ಸುಬ್ರಹ್ಮಣ್ಯ ಅವರು 1940 ರಲ್ಲಿ ಜಿಲ್ಲಾಧಿಕಾ

ರಾಧಿಕಾ ನಾಗ ಕನ್ನಿಕಾ !

ನಾಗಪ್ಪನಿಗೆ ಉದ್ದುದ್ದ ನಮಸ್ಕಾರ ಹಾಕಲು ಊರಿಗಿಳಿದ ರಾಧಿಕಾ, ಆಗಾಗ ಕೆಮ್ಮುತ್ತಿದ್ದರು. ಕೇಳಬಾರದ್ದನ್ನು ತವರಿನ ಪತ್ರಕರ್ತರು ಎಲ್ಲಿ ಕೇಳಿಬಿಡುವರೋ ಎಂಬ ದಿಗಿಲಲ್ಲಿದ್ದರು. ಸುತ್ತಲೂ ಮುತ್ತಿಕೊಂಡ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ರಾಧಿಕಾ ಈ ಬಾರಿ ಹುಷಾರಿಲ್ಲ, ಮುಂದಿನ ಬಾರಿ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಟ್ರೈ ಮಾಡ್ತೇನೆ ಎಂದು ಪತ್ರಕರ್ತರಿಗೆ ಆಶ್ವಾಸನೆ ನೀಡಿದರು. ಈ ಮಧ್ಯೆಯೂ ಅವರು ಮಾತನಾಡಿದ್ದು ಇಲ್ಲಿದೆ.. ಹೀಗಿದೆ.. ಜಿತೇಂದ್ರ ಕುಂದೇಶ್ವರ Radhika will be producing her first movie with Ganesh! ಮಂಗಳೂರಿನ ಚಿತ್ರ ನಟಿಯರಿಗೆಲ್ಲ ಈ ನಾಗ ದೇವರು ಅಂದ್ರೆ ಭಾರಿ ಭಕ್ತಿ! ಬಿಗ್ ಬ್ರದರ್ಸ್ ಶೋನಿಂದ ವಿಶ್ವವಿಖ್ಯಾತಿಯಾದ ಶಿಲ್ಪಾ ಶೆಟ್ಟಿ ತನ್ನ ತಂಗಿ ಶಮಿತಾ ಜತೆ ಊರಿಗೆ ಬಂದು ನಾಗಪೂಜೆ ಮಾಡಿದ್ದರು. ಬಾಲಿವುಡ್ ತಾರೆ ಐಶ್ವರ್ಯ ರೈ ಈ ಹಿಂದೆ ಹುಟ್ಟೂರಿಗೆ ಬಂದು ನಾಗಪೂಜೆ, ಕೋಲ ಮಾಡಿಸಿದ್ದರು. ಈಗ ಮಂಗಳೂರಿನ ಬೆಡಗಿ ರಾಧಿಕಾ ಸರದಿ. ನಾಗರಪಂಚಮಿಯಂದು ತವರಿಗೆ ಬಂದ ತಂಗಿ, ಬೆಳಗ್ಗೆ ತನ್ನ ಕುಳಾಯಿ ಕೂಚಿಮನೆ ಸಾಲ್ಯಾನ್ ಮೂಲಸ್ಥಾನಕ್ಕೆ ಬಂದು ನಾಗನಿಗೆ ಹಾಲೆರೆದರು. ಇದು ಸತತ ಮೂರನೇ ವರ್ಷದ ಹ್ಯಾಟ್ರಿಕ್ ಪೂಜೆ. ತನ್ನ ಸುತ್ತ ಹಾವಿನಂತೆ ಸುತ್ತುತ್ತಿರುವ ವಿವಾದ ದೂರವಾಗಲಿ, ಮಾಡುತ್ತಿರುವ ಹೊಸ ಚಿತ್ರ ಯಶಸ್ವಿಯಾಗಲಿ ಎಂದು ನಾಗದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರಂತೆ ! ಮಗಳಿಗೆ ಶೀತ ಮತ್ತು ಕೆಮ್ಮು ಬಾಧೆ ಇದೆ. ಪತ್ರಕರ್ತರ ಜತೆ ಮಾತನಾಡುವುದು ಸ್ವಲ್ಪ ಕಷ್ಟ ಎಂದು ತಂದೆ ದೇವರಾಜ ಶೆಟ್ಟರು ಹೇಳಿದರು. ಪಾಪ ರಾಧಿಕಾ ಆರೋಗ್ಯ ಇತ್ತೀಚೆಗೆ ಸರಿ ಇಲ್ಲ. ಮೊನ್ನೆ ಇನ್‌ಕಮ್ ಟ್ಯಾಕ್ಸ್ ರೈಡ್ ಆಗಿ ಗೋಣಿ ಚೀಲದಲ್ಲಿ ಹಣ ಕೊಂಡು ಹೋದಮೇಲೆ ಆರೋಗ್ಯ ಸ್ವಲ್ಪ ಹದಗೆಟ್ಟಿದೆ ! ಆದರೆ ಹೊಸ ಚಿತ್ರಕ್ಕೇನು ಹಣದ ಕೊರತೆ ಇಲ್ಲವಂತೆ.

2011-02-13

welcome... coming soon