2009-08-31

ಮಂಗಳೂರಲ್ಲಿ ಎಚ್ ೧ ಎಂ ೧ ಕೋಮು ಜ್ವರ

ಮಂಗಳೂರಲ್ಲಿ ಎಚ್ ೧ ಏನ್ ೧ಜ್ವರ ತಹಬದಿಗೆ ಬಂದರೂ ಎಚ೧ ಎಂ ೧ ಜ್ವರ ಉಲ್ಬಣ ಆಗಿದೆ. ಹುಬ್ಬದ ಸಂದರ್ಭದಲ್ಲಿ ವಕ್ಕರಿಸುವ್ ಇ ಜ್ವರ ೧೦ ದಿನಗಳಲ್ಲಿ ೯ ಮಂದಿಗೆ ಹಬ್ಬಿದೆ. ಎಚ್ ೧ ಎಂ ೧ಜ್ವರ ಅಂದರೆ ವೊಬ್ಬ ಹಿಂದೂ ಗೆ ಇರಿದರೆ, ಹೊಡೆದರೆ ಒಬ್ಬ ಮುಸ್ಲಿಂ ಗೆ ಹೊಡೆಯಬೇಕು !. ಪೋಲಿಸ್ ಕೂಡ ಬಂಧನ ಕಾರ್ಯಾಚರಣೆ ನಡೆಸದೆ ಇದ್ದ ಪರಿಣಾಮ ಕೋಮು ಪಾತಕಿಗಳು ವಿಜ್ರುಮ್ಭಿಸಲು ಕಾರಣವಾಗಿದೆ. ಆಗ್.೧೭ ರಿಂದ ಆರಂಭವಾದ ಇರಿತ ಪ್ರಕರಣ ೨೭ ರ ವರೆಗೆ ೯ ಮಂದಿ ಆಸ್ಪತ್ರೆ ಸೇರಲು ಕಾರಣ ಆಗಿದೆ. ೪ ಮುಸ್ಲಿಮರು ೫ ಹಿಂದೂಗಳು ಬಲಿಪಶುಗಲಾಗಿದ್ದರೆ. ಚರ್ಚ್ ದಾಳಿ ಸಂದರ್ಭದಲ್ಲಿಯೂ ೨ ದಿನದಲ್ಲಿ ೧೦ ಮಂದಿಗೆ ಇರಿಯಲಾಗಿತ್ತು. ಇ ಬಾರಿ ಪೊಲೀಸರು ನಿಷೇಧಾಜ್ಞೆ ವಿಧಿಸಿದರೂ ಇರಿತ ಪ್ರಕರಣ ಮಾತ್ರ ನಿಂತಿಲ್ಲ. ವೊಂದು ಅರ್ಥದಲ್ಲಿ ಪೊಲೀಸರು ವಿಫಲ ಆಗಿದ್ದರೆ. ಇ ಹಂದಿ ಜ್ವರಕ್ಕೂ ಕೋಮು ಜ್ವರಕ್ಕೂ ಸ್ವಾಮ್ಯ ಇದೆ. ಚೂರಿ ಇರಿತ ಆರಂಭ ಆಗಿದ್ದು ಹಂದಿ ಮಾಂಸ ಎಸೆದ ಬಳಿಕ. * ಹಂದಿ ಜ್ವರದಲ್ಲಿ ಹಕ್ಕಿ, ಹಂದಿ, ಮಾನವ ವೈರಸ್ ಮಿಳಿತ ಆಗಿದ್ದ್ದರೆ ಇ ಎಚ್ ೧ ಎಂ ೧ ಕೋಮು ಜ್ವರದಲ್ಲಿ ಹಂದಿ ಮಾಂಸ ಗೋ ಮಾಂಸ ಮತ್ತು ಮಾನವ ರಕ್ತ- ಮಾಂಸ ಸೇರಿಕೊಂಡಿದೆ ! ಹೇಗೆ ಎಂದರೆ ಮಸೀದಿಗೆ ಹಂದಿ ಮಾಂಸ ಹಾಕಿದರೆ ತಕ್ಷಣ ದೇವಸ್ಥಾನಕ್ಕೆ ಗೋ ಮಾಂಸ ಹಾಕುತ್ತಾರೆ ಬಳಿಕ ಒಂದು ಮಾನವ ನಿಗೆ ಇರಿದು ರಕ್ತ ತರ್ಪಣ ನೀದಲಾಗುತ್ತ್ತದೆ ! ಎಚ್ ೧ ಏನ್ ೧ ಜ್ವರ ಉಸಿರಾಟ ಸ್ಪರ್ಶ, ಸೀನು ಗಳಿಂದ ಹರಡುತ್ತದೆ. ಎಚ್ ೧ ಎಂ ೧ ಜ್ವರ ಗಾಳಿ ಸುದ್ದಿ -ವದಂತಿಯಿಂದ, ಭಿನಾ ಕೋಮಿನ ಯುವಕ ಯುವತಿಯರ ಸ್ಪರ್ಶ ಚುಡ ಯಿಸುವಿಕೆ ಇಂದ ಹರಡುತ್ತದೆ. ಹಂದಿ ಜ್ವರ ಬಂದ ಬಳಿಕ ಸೋಂಕಿಗೆ ಹೆದರಿ ಹಂದಿಗಳ ಸುಮ್ಹಾರ ನಡೆಯಿತು. ಕೊಮುಜ್ವರ ಸಂದರ್ಭ ಪವಿತ್ರ ಕ್ಷೇತ್ರಗಳಿಗೆ ಹಾಕಲು ದನ, ಹಂದಿಗಳನ್ನೂ ಕಡಿಯಲಾಯಿತು !

1 ಕಾಮೆಂಟ್‌:

ಜಲನಯನ ಹೇಳಿದರು...

ಜಿತೇಂದ್ರ ಸರ್, ಎಂತಹ ಸಮ್ಯೋಚಿತ ಚಿಂತನೆಯನ್ನು ಹುಟ್ಟುಹಾಕುವ ಲೇಖನ...ಯಾರಲ್ಲಿ...??/ ನಮ್ಮ ನಿಮ್ಮಲ್ಲಿ...ಕೊಲ್ಲುವ..ಅದೇ ಉದ್ಯೋಗದಲ್ಲಿರುವ ಕಟುಕರು...ಅದು ಪ್ರಾಣಿಗಳಾಗಿರಬಹುದು ಇಲ್ಲ ತನ್ನದೇ ಜಾತಿಯ (ಮನುಷ್ಯ ಜಾತಿಯ) ವ್ಯಕ್ತಿಯದಾಗಿರಬಹುದು...ಇದನ್ನು...ಮೂಸಿಯೂ ನೋಡುವುದಿಲ್ಲ ಚಿಂತನೆ ಮಾತು ಬಿಡಿ...
ನಮ್ಮ ಜನ ಎಚ್ಚೆತ್ತುಕೊಳ್ಳುವುದಕ್ಕೆ ...ಇನ್ನೂ ಎಷ್ಟು ನರಬಲಿ ಬೇಕೋ ತಿಳಿಯದು... ಚನ್ನಾಗಿದೆನಿಮ್ಮ ಲೇಖನ...ಶರಧಿ ಮೂಲಕ ಬಂದೆ...ನನ್ನ ಬ್ಲಾಗ್ ಗೂ ಬನ್ನಿ ಸಾರ್. www.jalanayana.blogspot.com